ಒಗ್ಗಟ್ಟನ್ನು ತೋರುವ ಸಮಯ ಬಂದಿದೆ, ಎಚ್ಚರಗೊಳ್ಳಿ ಚಲವಾದಿ ಹೊಲಯರೇ...




ಒಗ್ಗಟ್ಟನ್ನು ತೋರುವ ಸಮಯ ಬಂದಿದೆ...
ಎಚ್ಚರಗೊಳ್ಳಿ ಚಲವಾದಿ ಹೊಲಯರೇ...


ಓದಿ....


ನಾಳೆ ಭಾನುವಾರ, ಎಂದರೆ 2ನೇ ತಾರೀಖು ಜುಲೈ 2023ರಂದು Twitter (ಟ್ವಿಟರ್) ಹಾಗೂ Facebook (ಫೇಸ್ಬುಕ್‌) ಅಭಿಯಾನಕ್ಕೆ ತಯಾರಾಗಿ ಆದಿಕನ್ನಡಿಗರೇ...


10-11ನೇ ಶತಮಾನದಿಂದೀಚೆಗಿನ ಕನ್ನಡ ಸಾಹಿತ್ಯದಲ್ಲಿ ಉತ್ತರ ಭಾರತದ ಅಥವ ಪ್ರಾಕೃತ ಸಂಸ್ಕೃತಗಳ ಕಥೆ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿ ಕೃತಿಗಳನ್ನು ರಚಿಸುವ ಛಾಳಿ ಹೆಚ್ಚಿಕೊಂಡಾಗ ಅಲ್ಲಿನ ಅದರಲ್ಲಿನ "ವೈದಿಕಾರ್ಯ ಧರ್ಮ ಒಪ್ಪದೆ ಚಾತುರ್ವರ್ಣ ವ್ಯವಸ್ಥೆಯಿಂದ ಹೊರಗುಳಿದ ಅವರ್ಣೀಯರನ್ನು ಅಧರ್ಮಿಗಳು" ಎಂದ ಸಾಲುಗಳನ್ನು ಕನ್ನಡಕ್ಕೆ ಅಚ್ಚಿಳಿಸುವಾಗ, ಆದಿ ಕನ್ನಡ ಕುಲವಾದ, ಕನ್ನಡದ ಆದಿಮ ಸಮುದಾಯಗಳಾದ ಹೊಲಯ ಮಾದಿಗರನ್ನು ಮೇಲಿನ ಅರ್ಥಕ್ಕೆ ಸಮಾನಾಂತರಿಸಿ ಆರೋಪಿಸಿ ಬರೆಯಲಾರಂಭಿಸಿದರು. ಅಸಲಿಗೆ ದಕ್ಷಿಣ ಭಾರತದಲ್ಲಿ ಚಾತುರ್ವರ್ಣ ವ್ಯವಸ್ಥೆಯೇ ಇರದಿದ್ದಾಗ ಬ್ರಾಹ್ಮಣ ಅಬ್ರಾಹ್ಮಣವೆಂಬ ಭೇದವನ್ನರಸಿ ಹೀಗೆ ನೆಲೆಸುಗ ಸಮುದಾಯಗಳಾಗಿದ್ದ, ಆಳರಸರಾಗಿದ್ದ ಹೊಲಯ ಮಾದಿಗ ಹೆಸರುಗಳನ್ನು ಕೀಳೆಂಬಂತೆ ಅರ್ಥ ಕಲ್ಪಿಸಿ ಬರೆದು ಆ ಅರಸರು ಸಹ ಉತ್ತರದ ಅಯೋಧ್ಯ, ಲುಂಬಿನಿ, ದ್ವಾರಕ, ಕೋಸಲ, ಕಪಿಲವಸ್ತುಗಳಿಂದ ತಮ್ಮ ಮೂಲವನ್ನು ಬರೆಸಿಕೊಳ್ಳುವಂತೆ ಮಾಡಿದ್ದರು. ಅಂದಿನಿಂದ ಶುರುವಾದ ಹೊಲಯ ಮಾದಿಗ ಹೆಸರುಗಳ ತುಚ್ಛೀಕರಿಸುವ ಈ ಕೆಟ್ಟ ಛಾಳಿ ಇಂದಿಗೂ ಮುಂದುವರೆದಿದೆ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕವೂ ಅದು ಮುಂದುವರೆಯುತ್ತಿದೆ.

ಈಗಲೂ ನಾವೂ ಸುಮ್ಮನಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿರಲಾರದು. ಈಗಲೂ ನಮ್ಮ ಆಕ್ರೋಶದ ಕೂಗು ಹೆಚ್ಚಾಗದಿದ್ದರೆ ಇದು ಕೇವಲ ನಾವು ನಮಗೆ ಮಾಡಿಕೊಳ್ಳುವ ಅನ್ಯಾಯವಾಗಿ ಉಳಿಯುವುದಿಲ್ಲ, ಬದಲಿಗೆ ಈ ನೆಲಕ್ಕೆ ಕನ್ನಡ ನಾಡಿಗೆ, ಆದಿ ಕನ್ನಡ ಕುಲಕ್ಕೆ ಎಸಗುವ ದ್ರೋಹವಾಗಿಯೂ ಉಳಿದೀತು. ಇದೇ ಪಾಠವನ್ನು ನಮ್ಮ ಮಕ್ಕಳು ಸಹ ಓದುವವರಾಗುತ್ತಾರೆ, ನಮ್ಮ ಬಗ್ಗೆ ನಾವೇ ಕೀಳರಿಮೆಯನ್ನು ರೂಢಿಸಿಕೊಂಡು ಅದನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿಯೂ ಬಿತ್ತುವ ಅವಕಾಶವನ್ನು ಮಾಡಿಕೊಟ್ಟು ನಮ್ಮ ಮಕ್ಕಳಿಗೂ ನಮ್ಮ ಮುಂದಿನ ತಲೆಮಾರುಗಳಿಗೂ ದ್ರೋಹವೆಸಬಾರದು. ಈ ಕೆಟ್ಟ ಛಾಳಿಗೆ ಕೊಳ್ಳಿ ಇಟ್ಟು ಇದಕ್ಕೆ ಅಂತ್ಯವನ್ನಾಡಬೇಕಿದೆ.

ದೊಡ್ಡವರೆನಿಸಿಕೊಂಡ ದಡ್ಡ ಮಂದಿಗೆ ಈಗ ನಾವು ಪಾಠ ಮಾಡುವ ಸಮಯ ಬಂದಿದೆ. ನಮ್ಮ ಇತಿಹಾಸವನ್ನು ಜಗತ್ತಿಗೆ ತಿಳಿಸಿಕೊಡುವ ಸಮಯ ಬಂದಿದೆ. ಶೋಷಣೆ ಎಂದರೆ ಕೇವಲ ಗುದ್ದಾಟ ಹೊಡೆದಾಟ ಹೊಡೆತ ಅತ್ಯಾಚಾರಗಳಷ್ಟೇ ಅಲ್ಲ. ಈ ರೀತಿಯಾಗಿ ಒಬ್ಬರ ಇತಿಹಾಸವನ್ನು, ಒಬ್ಬರ ಗುರುತಿನ ಹೆಸರನ್ನು, ಅದರ ಅರ್ಥವನ್ನೂ ಕೆಡಿಸುವುದು ಸಹ ಶೋಷಣೆಯೆ. ಇದು ಶೋಷಣೆಗಿಂತಲೂ ದೊಡ್ಡದು. ಇದನ್ನು ನಾವು ಆಗಾಗೇ ಅಲ್ಲಿಂದಲ್ಲೇ ಹೊಸಕಿ ಹಾಕಿತ್ತಿರಬೇಕು.

ಹಿಂದೆ ಬ್ರಿಟೀಷ್‌ ಸರ್ಕಾರವಿದ್ದಾಗಲೂ ಸಹ ಬೇಡರ, ಲಂಬಾಣಿಗಳ ಹಾಗೂ ಇತರೆ ಸಣ್ಣಪುಟ್ಟ ಬುಡಕಟ್ಟು ಸಮುದಾಯಗಳ ಮೇಲೆ ಕಳ್ಳ ದುಷ್ಟ ದರೋಡೆಕೋರ ಎಂಬಂತೆ ಆರೋಪಿಸುವ "ಕ್ರಿಮಿನಲ್‌ ಟ್ರೈಬ್"‌ ಕಾನೂನನ್ನು ರೂಪಿಸಿ ಇವರನ್ನೂ ಶೋಷಿಸಲಾಗಿತ್ತು. ಬ್ರಿಟೀಷರು ಭಾರತವನ್ನು ಬಿಟ್ಟು ತೊಲಗಿದ ನಂತರ ಆ ಕಾನೂನನ್ನು ರದ್ದು ಮಾಡಲಾಯಿತು. ಆದರೆ ಬ್ರಿಟೀಷರು ತೊಲಗಿದರೂ ಸಹ ಆ ಮನಸ್ಥಿತಿ ಇನ್ನೂ ಭಾರತದಲ್ಲಿ ಹಾಗೇ ಉಳಿದಿರುವುದಕ್ಕೆ ಸಾಕ್ಷಿ ಈ ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಕನ್ನಡ ನಿಘಂಟು.

ಹೊಲಯ ಎಂಬ ಪದದ ನಿಜಾರ್ಥ ಹೊಲಕ್ಕೆ ಹೊಂದಿಕೊಂಡವನು, ಹೊಲದವನು, ಹೊಲದೊಡೆಯ, ಮಣ್ಣಿನ ಮಗ, ಸಹಜ ಹುಟ್ಟುಳ್ಳವನು (ವೈದಿಕ ಹುಟ್ಟಿಗೆ ವಿರುದ್ಧವಾಗಿ), ವೈದಿಕಾರ್ಯ ಮತ ಚಾತುರ್ವಣ ವ್ಯವಸ್ಥೆಯಿಂದ ಹೊರಗುಳಿದವನು, ಅವರ್ಣೀಯ, ಆದಿಮ ಬುಡಕಟ್ಟು, ಪಾರ್ವತೀಯ ಮಕ್ಕಳು, ಶಾಕ್ತ ಧರ್ಮದವರು, ತಂತ್ರ ಪಂಥದವರು, ಲೋಕಾಯತರು, ಸಾಂಖ್ಯರು, ಅಜೀವಕರು ಎಂಬಲ್ಲಾ ಅರ್ಥಗಳಿದ್ದರೂ ಸಹ ಇಲ್ಲಿ ದುಷ್ಟ ನೀಚ ಎಂದು ಅರ್ಥ ಕೊಟ್ಟಿರುವುದನ್ನು ಕಂಡರೆ, ಹಿಂದೆ ಬೇಡರನ್ನು ಲಂಬಾಣಿಗಳನ್ನು ಕಳ್ಳರು ದುಷ್ಟರು ಎಂದೆಲ್ಲಾ ಜರಿದು ಕ್ರಿಮಿನಲ್‌ ಟ್ರೈಬ್ಸ್‌ ಎಂಬುದನ್ನು ಸೃಷ್ಟಿಸಿದ್ದ ಬ್ರಿಟೀಷರಂತೆ ಕನ್ನಡ ಸಾಹಿತ್ಯ ಪರಿಷತ್ತಿನೊಳಗೆ ಇಂಡೋ ಐರೋಪ್ಯ/ಬ್ರಿಟೀಷ್‌ ಸಂತತಿಗಳು ನುಸುಳಿರಬಹುದೇನೋ ಎಂಬ ಅನುಮಾನ ಮೂಡದೆ ಇರದು.

ಈ ಉಪಖಂಡ ಭಾರತವನ್ನು, ನಮ್ಮ ಕರ್ನಾಟ ರಾಷ್ಟ್ರವನ್ನು
ಮಹಾನ ಆಳರಸರಾಗಿಯೂ,
ಅರಿವಿಗರಾಗಿಯೂ,
ಕಾವಲಿನ ಕಾವುಂಡರಾಗಿಯೂ,
ತುರುಕಾಳಗದ ವೀರಮಕ್ಕಳಾಗಿಯೂ,
ರಣಕಾಳಗದ ರಣಕಲಿಗಳಾಗಿಯೂ,
ಊಳಿಗದ ಆಳುಗಳಾಗಿಯೂ,
ಕೋಟೆ, ಕೊತ್ತಲು, ಕೆರೆ, ಕಟ್ಟೆ, ಹೊಳೆದಾಟುಗಳಿಗೆ ಬಲಿ ಹಾರವಾಗಿಯೂ
ಗುಡಿಯೊಳಗೆ ಗದ್ದುಗೆಗಳಾಗಿಯೂ
ನೆಟ್ಟುಲಿಂಗಗಳಾಗಿಯೂ
ಈ ನೆಲದ ನಾಗರೀಕತೆಯನ್ನು ಕಟ್ಟಿದವರೂ ಹೊಲಯ ಮಾದಿಗರು ಮಾತ್ರ.
ಇಂಥ ಜನಕುಲಕ್ಕೆ ಇಂಥಹ ಅವಮಾನ ಸಲ್ಲದು. ಇಂಥಹ ತುಚ್ಛೀಕರಣವನ್ನು ಒಪ್ಪಲಾಗದು.


ಬನ್ನಿ, ಜುಲೈ  2ನೇ ತಾರೀಖು 2023, ಭಾನುವಾರ ಸಂಜೆ 5ಗಂಟೆಯಿಂದ 8ಗಂಟೆಯವರೆಗೆ, ನಮ್ಮTwitter (ಟ್ವಿಟರ್‌) ಹಾಗೂ Facebook (ಫೇಸ್‌ಬುಕ್) ಅಭಿಯಾನದಲ್ಲಿ ಪಾಲ್ಗೊಳ್ಳಿ. ಈ ಅಭಿಯಾನವನ್ನು ಬೆಂಬಲಿಸಿ, ಯಶಸ್ವಿಗೊಳಿಸಿ. ಇದು ಕೇವಲ ಆದಿ ಕನ್ನಡ ಕುಲಜನರ ಅಭಿಯಾನವಲ್ಲ, ಎಲ್ಲಾ ಕನ್ನಡ ಮನಸ್ಸುಗಳ, ಕನ್ನಡವಾದಿಗಳ, ಕನ್ನಡ ಪ್ರೇಮಿಗಳ, ಈ ನೆಲದ ಘನತೆಯ ವಿಚಾರ.

ಎಲ್ಲಾ ಕುಲಬಾಂಧವರಲ್ಲಿ ವಿನಂತಿ. ಶನಿವಾರದೊಳಗೆ ನಿಮ್ಮ ನಿಮ್ಮ Twitter (ಟ್ವಿಟರ್‌) ಹಾಗೂ Facebook (ಫೇಸ್‌ಬುಕ್) ಅಕೌಂಟ್‌ಅನ್ನು ಸಕ್ರಿಯವಾಗಿಟ್ಟುಕೊಂಡಿರಿ. ಅಭಿಯಾನ ಭಾನುವಾರ ಸಂಜೆ 5ಕ್ಕೆ ಪ್ರಾರಂಭವಾಗಿ ರಾತ್ರಿ 8ಕ್ಕೆ ಮುಗಿಯಲಿದೆ.

ಮುಂದಿನದ್ದನ್ನು ದಯವಿಟ್ಟು ಗಮನವಿಟ್ಟು ಓದಿ, ಅರ್ಥ ಮಾಡಿಕೊಳ್ಳಿ

Twitter (ಟ್ವಿಟರ್‌) ಹಾಗೂ Facebook (ಫೇಸ್‌ಬುಕ್) ಅಭಿಯಾನ ಮಾಡುವಾಗ ಟ್ವಿಟ್‌ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯರವನ್ನು (@Siddaramaiah), ಪ್ರಿಯಾಂಕ್‌ ಖರ್ಗೆ (@PriyankKharge) ಅವರನ್ನು ಹಾಗೂ  ಕನ್ನಡ ಸಾಹಿತ್ಯ ಪರಿಷತ್ (@Kannada Sahitya Parishat)‌  ಅನ್ನು ಟ್ಯಾಗ್‌ ಮಾಡುವುದನ್ನು ಮರೆಯಬೇಡಿ.


ಅಭಿಯಾನದಲ್ಲಿ ಭಾಗವಾಹಿಸಲು ನಾವು ಹಂಚಲಿರುವ ಇಮೇಜ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ನಿಮ್ಮ Twitter (ಟ್ವಿಟರ್)‌ ಹಾಗೂ Facebook (ಫೇಸ್‌ಬುಕ್‌) ಖಾತೆಯಲ್ಲಿ ಹಂಚಬೇಕು. ಹೀಗೆ ಹಂಚುವಾಗ ಪೋಸ್ಟ್‌ನಲ್ಲಿ ಬರೆದು ಬಳಸಬೇಕಿರುವ Hashtagಗಳು ಕೆಳಗಿನಂತಿವೆ.

Twitter (ಟ್ವಿಟರ್) ಗೆ (ಇದನ್ನು Twitterಗೆ ಕಾಪಿ ಪೇಸ್ಟ್‌ ಮಾಡಬಹುದು) 👇🏽

@Siddaramaiah
@KannadaParishat
@PriyankKharge
#ದಲಿತಜನಕುಲಗಳತುಷ್ಟೀಕರಣನಿಲ್ಲಿಸಿ #stopdemeaningdalitraces #shameonyoukasapa #adikannadakula #dalithistory #jaibhim #jaiholeya #jaiholaya #jaichalavadi #jaimadiga #jaiadijambava #jaiasadi #jaipanar #jainalkadaye #jaikoraga #jaimansa

 

Facebook (ಫೇಸ್‌ಬುಕ್‌) ಗೆ (ಇದನ್ನು Facebookಗೆ ಕಾಪಿ ಪೇಸ್ಟ್‌ ಮಾಡಬಹುದು) 👇🏽


@Siddaramaiah.Official
@kasapaofficial 
 @Priyank Kharge
#ದಲಿತಜನಕುಲಗಳತುಷ್ಟೀಕರಣನಿಲ್ಲಿಸಿ
#stopdemeaningdalitraces
#shameonyoukasapa
#adikannadakula
#dalithistory
#jaibhim #jaiholeya #jaiholaya #jaichalavadi #jaimadiga #jaiadijambava #jaiasadi #jaipanar #jainalkadaye #jaikoraga #jaimansa #jaiparava #jaipambada #jairanyar #jaikusa #jaihallir #jaibaira #jaibakuda #jaiajila #jaimaleya #jaikudiya #jaiADIMA #jaiADIKARNATAKA #jaiADIDRAVIDA #jaiADIANDHRA 

ಆದಿಗುರು ಶ್ರೀ ಶಂಕರಾಚಾರ್ಯರ ಅದ್ವೈತ ಸಿದ್ದಾಂತಕ್ಕೆ ಪರಿಪೂರ್ಣತೆ ಕೊಟ್ಟದ್ದು ಅಲಂಕಾರನೆಂಬ ಹೊಲಯರ ಹುಡುಗ!!!

ಕೇರಳದ “ಪೊಟ್ಟನ್ ತೆಯ್ಯಂ” (ಉತ್ತರ ಕೇರಳದಲ್ಲಿ‌ ನಡೆಯುವ ಒಂದು ದೈವದ ಭೂತಾರಾಧನೆ) ಪ್ರಕಾರ ಶಂಕರರ “ಅದ್ವೈತ” ಸಿದ್ದಾಂತವನ್ನು ಪರಿಪೂರ್ಣಗೊಳಿಸಿ ಕೊಟ್ಟವ ಒಬ್ಬ ಪುಲಯ (ಹೊ...